Friday, April 25, 2008

ನಡುಗಡ್ಡೆ

ಸುತ್ತುವರಿದ ನೀರ ನಡುವೆ
ಮುಳುಗಿ ಉಳಿದ ನೆಲದ ಮೇಲೆ

ಒಣಗಿನಿಂತ ಕೊರಲು ಕುಂಟೆ
ಅಳಿದು ಉಳಿದ ಹಸಿರ ಉಸಿರು

ಹೇಳುತಿಹುದೇ ತನ್ನ ಕಥೆಯ?
ನಾವರಿಯದ ಒಡಲ ವ್ಯಥೆಯ.

ಜನಕೆ ಬೆಳಕು ನೀಡಲೆಂದು
ತನ್ನ ಜೀವ ಒತ್ತೆ ಇಟ್ಟು

ಮುಳುಗಿ ಸತ್ತ ಬಂಧುಗಳನು
ನೆನೆಯುತಿಹುದೆ ಕಣ್ಣೀರಿಟ್ಟು..?

No comments: